Monday, October 26, 2009

ನರಸಿಂಹಚರಿತ್ರೆ - ೧

ಶ್ರೀಲ ಲೋಲ ಮನೋಹಾರ ಶುದ್ಧ ಲಕ್ಷ್ಮಿನಾರಸಿಂಹ
ದೀನ ಪಾಲಕನೆ ತ್ರೈಲೋಕ್ಯ ಪಾಲ ನಾರಸಿಂಹ
ಕಮಲನಯನ ಕಮಲ ಗೋ ಕಮಲಭೃಂಗ ನಾರಸಿಂಹ
ವಿಮಲವಿಭವ ವಿಶ್ವಮೂರ್ತಿ ವಿಶ್ವಮೂರ್ತಿ ನಾರಸಿಂಹ

ಲೀಲೆಯಿಂದ ಆಲದೆಲೆಯ ಮೇಲೆ ಇದ್ದೆ ನಾರಸಿಂಹ
ಪಾಲಿಸಿದೆ ತ್ರಿಜಗವನ್ನು ಪ್ರಳಯದಿಂದ ನಾರಸಿಂಹ
ಮತ್ಸ್ಯಮುಖದಿ ಸೋಮಕನ್ನ ಮರ್ಧಿಸಿದೆ ನಾರಸಿಂಹ
ಅಚ್ಚರಿಪೋ ವೇದಗಳನು ಅಜನಿಗಿತ್ತೆ ನಾರಸಿಂಹ

ಕೂರ್ಮರೂಪಿನಿಂದ ಗಿರಿಯ ಕೂಡಿ ಮೆರೆದೆ ನಾರಸಿಂಹ
ಆ ಮಹಾ ಅಮೃತಗಳನು ಸುರರಿಗಿತ್ತೆ ನಾರಸಿಂಹ
ಉರಿಯ ಮರಣದಾ ಒಳಗೆ ಉದ್ಭವಿಸಿದೆ ನಾರಸಿಂಹ
ಮುರಿಯ ಬಂದ ಮೃತ್ಯುವಿಂಗೆ ಮೃತ್ಯುವಾದೆ ನಾರಸಿಂಹ

ಉಪ್ಪರಿಗೆಯಿಂದಲೀ ಉರುಳಿದನಯ ನಾರಸಿಂಹ
ಅಪ್ಪಿಕೊಂಡು ಕಾಯೊ ಎನ್ನ ಅಪ್ಪ ನೀನು ನಾರಸಿಂಹ
ಜಟ್ಟಿಗಳ ಜಗಕ್ಕೆ ಜಗಜ್ಜಟ್ಟಿ ನೀನು ನಾರಸಿಂಹ
ಗಟ್ಟಿ ವಜ್ರಸೂತ್ರಗಳಿಗೆ ಕವಚನೀನು ನಾರಸಿಂಹ

ಯಂತ್ರಮಂತ್ರಾಗಳಿಗೆ ಮಂತ್ರ ನೀನು ನಾರಸಿಂಹ
ಯಂತ್ರ ಕಾವು ರಕ್ಷೆಗಳಿಗೆ ತಂತ್ರ ನೀನು ನಾರಸಿಂಹ
ದಾಸಾನುಗ್ರಹವನ್ನು ಧಾರಣಿಪೋ ನಾರಸಿಂಹ
ಶಂಖಚಕ್ರ ಅಭಯಹಸ್ತ ಅಂಕಿತವೇ ನಾರಸಿಂಹ

ಸ್ವಾಮೀ ನಿಮ್ಮ ಚಿತ್ತ, ಗಂಗೆ ಗೋದಾವರಿ ಕೃಷ್ಣವೇಣಿ ಭೀಮರತಿ, ನರಸಿಂಗನ ಚರಿತ್ರೆಯನ್ನು ಹಿಂಗದೆ ಹೇಳಿ-ಕೇಳಿದವರಿಗೆ ಅಷ್ಟೈಶ್ವರ್ಯವನ್ನೂ ಪುತ್ರ ಸಂತಾನವನ್ನೂ ಸಾಯುಜ್ಯದ ಮುಕ್ತಿಯನ್ನೂ ಕೊಟ್ಟು ರಕ್ಷಿಸುವನು ಸಿರಿಹಯವದನ ಶ್ರೀಲಕ್ಷ್ಮೀ ನಾರಸಿಂಹನು...

ಇತಿಶ್ರೀ ನರಸಿಂಹ ಸ್ತೋತ್ರ ಸಂಪೂರ್ಣಂ

ಶ್ರೀಕೃಷ್ಣಾರ್ಪಣಮಸ್ತು.

ಇದು ನಮ್ಮ ತಂದೆಯ ಮನೆಯಲ್ಲಿ ಹೇಳುತ್ತಿದ್ದುದು. ನೆನಪು ಕೈಕೊಟ್ಟ ಕಡೆಯೆಲ್ಲಾ ಎಂದಿನಂತೆಯೇ ಸಾಲುಗಳನ್ನು ಎತ್ತಿಕೊಟ್ಟ ಚಿಕ್ಕಪ್ಪನವರಿಗೆ ಧನ್ಯವಾದಗಳು

1 comment:

R. K. DIVAKARA said...

"ಇದು ನಮ್ಮ ತಂದೆಯ ಮನೆಯಲ್ಲಿ ಹೇಳುತ್ತಿದ್ದುದು" ಈ "ಹೇಳಿಕೆ"ಗೆ ಪಾರಂಪರಿಕ ಹಿನ್ನೆಲೆಯನ್ನು "samajkumhi" ವಿವರವಾಗಿ ಕೊಡುತ್ತೆನೆ